ಗುರುವಾರ, ಏಪ್ರಿಲ್ 21, 2011

ಮಂಠಾಳಕರ್ ಅವರ ಸುಳಿಗಳು ಸಂಕಲನದಿಂದ ಆಯ್ದ ಕೆಲವು ಚುಟುಕುಗಳು


ಮಂಠಾಳಕರ್ ಅವರ ಸುಳಿಗಳು ಸಂಕಲನದಿಂದ ಆಯ್ದ ಕೆಲವು ಚುಟುಕುಗಳು 

ಮಂಠಾಳಕರ್ ಅವರ (ಸುಳಿಗಳು) ಕವನ-ಹನಿಗವನಗಳಸಂಕಲನ         
ಮಾನ್ಯರೆ,

ವೀರಣ್ಣ ಮಂಠಾಳಕರ್ ಅವರು ಮೊದಮೊದಲು ಬೀದರ ಜಿಲ್ಲೆಗೆ ಹೆಸರಾಂತ ಚುಟುಕು ಸಾಹಿತಿಯೆಂದೇ ಹೆಸರಾಗಿದ್ದರು. ಇತ್ತೀಚೆಗಷ್ಚೆ ಕಥೆ, ಕವನ, ಲೇಖನಗಳು ಬರೆಯುವುದರ ಮುೂಲಕ ಬಹುಮುಖ ಪ್ರತಿಭೆಯಾಗಿದ್ದಾರೆ, ಕಾವ್ಯದಲ್ಲಿ ವಿಶೇಷವಾದ ಆಸಕ್ತಿ ಹೊಂದಿರುವ ಇವರು ಪ್ರಸ್ತುತ ಪತ್ರಕತ೯ರಾಗಿ ಬಸವಕಲ್ಯಾಣದಲ್ಲಿ ಸೇವೆ ಸಲ್ಲಿಸುತಿದ್ದಾರೆ. ಇವರ ಅನೇಕ ಬಿಡಿ ಬರಹಗಳು ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದವರಾದ ಇವರು ವಿವಿಧ ಆಸಕ್ತಿಗಳನ್ನು ಹೊಂದಿದ್ದಾರೆ. ಅನೇಕ ಬಿಡಿ ಬರಹಗಳನ್ನು ರಚಿಸಿದ್ದಾರೆ. ಇವರು 2005 ರಲ್ಲಿ ತಮ್ಮದೇ ಪ್ರಕಾಶನದಡಿಯಲ್ಲಿ ಸಂಕಲ್ಪ ಎಂಬ ಸಾಹಿತ್ಯ ಪತ್ರಿಕೆಯೊಂದನ್ನು ಆರಂಭಿಸಿದರು. ಪತ್ರಿಕೆಯ ಉದ್ದೇಶ ಯುವ ಬರಹಗಾರರನ್ನು ಗುರುತಿಸುವುದು, ಅವರಿಗೆಂದೇ ಪ್ರತ್ಯೇಕವಾದ ವೇದಿಕೆ ಕಲ್ಪಿಸಿಕೊಟ್ಟು ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮವಾದ ಸೇವೆ ಸಲ್ಲಿಸಿದವರನ್ನು ಹಾಗು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರ ಕುರಿತು ಬರೆಯುವುದರಿಂದ ಹಿಡಿದು ಮುಂತಾದ ಯೋಜನೆಗಳನ್ನು ಹಾಕಿಕೊಂಡಿದ್ದರು. ಕನಸುಗಳನ್ನು ಕೈಗೂಡದೆ ಸಂಕಲ್ಪ ಮಾಸ ಪತ್ರಿಕೆ ಆಥಿ೯ಕ ಮುಗ್ಗಟ್ಟಿನಿಂದ ಅನಿವಾಯ೯ ಕಾರಣಕ್ಕೆ ನಿಲ್ಲಿಸಬೇಕಾಯಿತು. ಇಲ್ಲಿಗೆ ಮಂಠಾಳಕರ್ ಅವರ ಆಸಕ್ತಿ ಕುಂದಲಿಲ್ಲ. ಕನಸುಗಳು ಗಗನದೆತ್ತರಕ್ಕೆ ಹಾರಾಡುತ್ತಲೆ ಇದ್ದವು. ಆ ಕಾರಣದಿಂದ ಎಲ್ಲೇ ಇದ್ದರೂ ಅವರಲ್ಲಿ ಸಂಕಲ್ಪ ಎಂಬ ಪದ ಚಿಗುಗೊಡೆಯುತ್ತಲೇ ಇತ್ತು ಅದರ ಒಂದು ಪ್ರತೀಕ ಇದೀಗ ವೀರಣ್ಣ ಮಂಠಾಳಕರ್ ಅವರು ತಮ್ಮ ಸ್ವ-ಸಾಮಥ್ಯ೯ದಿಂದ ಕಂಪ್ಯೂಟರ್ ಲೋಕವನ್ನು ಪ್ರವೇಶಿಸಿದ್ದಾರೆ. ತಮಗನಿಸಿದ್ದನ್ನು, ತಮ್ಮ ವಿಚಾರಕ್ಕೆ ಬಂದಿದ್ದನ್ನು ವೀರ ಸಂಕಲ್ಪ ಮತ್ತು ಕವಿ-ಕಲಾವಿದರು ಬ್ಲಾಗನಲ್ಲಿ ಅನಾವರಣಗೊಳಿಸುವ ಉದ್ದೇಶದಿಂದ ಅವರ ಒಂದು ಮಹತ್ವವಾದ ಕನಸನ್ನು ಸಾಕಾರಗೊಳಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಭಿನಂದಿಸೋಣ. ಮಂಠಾಳಕರ್ ಅವರ ಸುಳಿಗಳು ಕವನ ಸಂಕಲನ 2006 ರಲ್ಲಿ ಪ್ರಕಟಗೊಂಡಿದ್ದು ಸಂಕಲನದಿಂದ ಕೆಲವು ಆಯ್ದ ಚುಟುಕುಗಳು ನಿಮಗಾಗಿ....ಕೊಟ್ಟಿದ್ದೇವೆ. ಹಂತ-ಹಂತವಾಗಿ ಜಿಲ್ಲೆ, ರಾಜ್ಯ-ರಾಷ್ಟ್ರ ಕವಿಗಳು, ಕಲಾವಿದರ ಕುರಿತು ಈ (ಕವಿ-ಕಲಾವಿದರು) ಬ್ಲಾಗನಲ್ಲಿ ಪರಿಚಯಿಸುವ ಮಹತ್ವದ ಯೋಜನೆ ಇವರಲ್ಲಿ ಗರಿಗೆದರಿದೆ. ಅದಕ್ಕಾಗಿ ನಾವೆಲ್ಲ ಬೆಂಬಲಿಸೋಣ. ಅವರ ಜೊತೆಯಾಗಿ ಇರೋಣ. ಏನಂತಿರಾ...? ಓದಿ ಅಬಿಪ್ರಾಯ ಬರೆಯಿರಿ...............
      
                                                                 ನಿಮ್ಮ
                                                            ಅಕ್ಷರ ಪ್ರೇಮಿ




















ಕಾಮೆಂಟ್‌ಗಳಿಲ್ಲ: