ಸೋಮವಾರ, ಏಪ್ರಿಲ್ 18, 2011

ಕವಿ-ಕಲಾವಿದರ ಸಂಕ್ಷಿಪ್ತ ಪರಿಚಯ




ವೀರಣ್ಣ ಮಂಠಾಳಕರ್ ಅವರ ಗಾಂಧಿ ಆಗ್ಬೇಕಂದುಕೊಂಡಾಗ ಕವನ ಸಂಕಲನದಿಂದ ಆಯ್ದ ಕವಿತೆಗಳು

     ವೀರಣ್ಣ ಮಂಠಾಳಕರ್
ಮಂಠಾಳಕರ್ ಅವರು ಹೆಸರಾಂತ ಕವಿಯಾಗಿ, ಬೀದರ ಜಿಲ್ಲೆಯ ಪ್ರತಿಭಾವಂತ ಲೇಖಕರಲ್ಲಿ ಪ್ರಮುಖವಾಗಿ ಎದ್ದು ಕಾಣುವ ಇವರ ಆಸಕ್ತಿಗಳು ವಿಬಿನ್ನವಾಗಿ ಕಂಡು ಬರುತ್ತದೆ. ಪತ್ರಕತ೯ರಾಗಿ, ಸಂಪಾದಕರಾಗಿ, ಅಂಕಣ ಬರಹಗಾರರಾಗಿ, ಸೇವೆ ಸಲ್ಲಿಸಿರುವ ಇವರು ಕನ್ನಡ ಚಲನಚಿತ್ರದಲ್ಲಿ ಗೀತ ರಚನೆ ಮಾಡುವ ಸಂಕಲ್ಪವನ್ನು ಕೂಡ ಹೊಂದಿದ್ದಾರೆ. ಈಗಾಗಲೆ ನಾಲ್ಕು ಸ್ವರಚಿತ ಕವನ ಸಂಕಲನ ಹಾಗು ಬದುಕಿನ ಬೆನ್ನೇರಿ ಎಂಬ ಕಥಾ ಸಂಕಲನ ಪ್ರಕಟಿಸಿದ್ದಾರೆ. ವೀರಣ್ಣ ಮಂಠಾಳಕರ್ ಅವರ ಗಾಂಧಿ ಆಗ್ಬೇಕಂದುಕೊಂಡಾಗ ಕವನ ಸಂಕಲನದ ವಿಮಶೆ೯ ಕನ್ನಡಪ್ರಭ ಪತ್ರಿಕೆಯಲ್ಲಿ ನವೆಂಬರ್14ರಂದು ಅಕ್ಷರ ತೋರಣದಲ್ಲಿ ವಿಮಶೆ೯ಗೊಳಪಟ್ಟಿದೆ. ಇದರಿಂದ ಇವರ ವ್ಯಕ್ತಿತ್ವಕ್ಕೆ ಇನ್ನಷ್ಟು ಮೆರುಗನ್ನು ತಂದುಕೊಟ್ಟಿದೆ. ಯಾರೂ ಇವರನ್ನು ಗುರುತಿಸದಿದ್ದರೂ ಸ್ವ-ಸಾಮಥ್ಯ೯ ವ್ಯಕ್ತಿತ್ವದ ಮಂಠಾಳಕರ್ ಚುಟುಕು  ಸಾಹಿತ್ಯದಿಂದ ವಿಶೇಷವಾದ ಗಮನ ಸೆಳೆಯುತ್ತಾರೆ. ಅನೇಕ ಕವಿತೆಗಳು, ಕಥೆಗಳು, ಲೇಖನಗಳನ್ನು ರಚಿಸಿರುವ ಇವರು ಕೊಂದವರು ಮತ್ತು ಹಸಿವು ಎಂಬ ಎರಡು ಕಾದಂಬರಿ ರಚನೆಯಲ್ಲಿ ಇದೀಗ ತಲ್ಲೀನರಾಗಿದ್ದಾರೆ. ಸೂಕ್ತವಾದ ವೇದಿಕೆ, ಪ್ರೋತ್ಸಾಹಗಳನ್ನು ದೊರೆತರೆ ಉನ್ನತಮಟ್ಟದ ಬರಹಗಾರರಾಗಿ ಇವರು ಬೀದರ ಜಿಲ್ಲೆಗೆ ಹೆಸರಾಂತ ಸಾಹಿತಿಗಳಾಗಿ ಮುಂದೊರೆಯಲಿದ್ದಾರೆ ಎಂಬ ವಿಶ್ವಾಸ ಮಂಠಾಳಕರ್ ಅವರ ಬರವಣಿಗೆಯಿಂದ ತಿಳಿದು ಬರುತ್ತದೆ. ಇವರ ಗಾಂಧಿ ಆಗ್ಬೇಕಂದುಕೊಂಡಾಗ ಕವನ ಸಂಕಲನದಿಂದ ಒಂದಿಷ್ಟು ಆಯ್ದ ಕವಿತೆಗಳು ನಿಮಗಾಗಿ ಇಲ್ಲಿ ಕೊಡಲಾಗಿದೆ. ಓದಿ ಅಭಿಪ್ರಾಯ ಬರೆಯುತ್ತಿರಲ್ಲ...?
                       ಭಾಗ್ಯಶ್ರೀ ಹಾರಕೂಡೆ,ಹುಲಸೂರು ಬಸವಕಲ್ಯಾಣ































ಕಾಮೆಂಟ್‌ಗಳಿಲ್ಲ: