ಮುಖವಾಡಗಳ ಸಂಗದಲ್ಲಿ
-------------------------
ತೋರಿಕೆಗೆ ಮಾತ್ರ ತೋರಣ ಕಟ್ಟುವ
ಸಮಾರಂಭಗಳು ಯಾರಿಗೆ ಬೇಕು
ಈ ನಿಮ್ಮ ಮೇಜು ಕುಚಿ೯ಗಳು
ಹಸಿದವರ ಹೊಟ್ಟೆಗೆ ಅನ್ನ ನೀಡದಿರುವಾಗ
ದಣಿದು ಬಂದವರಿಗೆ ದಣಿವಾರಿಸಿಕೊಳ್ಳಲು
ಆಗದಿರುವಾಗ....
ನೈಜ ಪ್ರತಿಭೆಗಳ ಕೊಲೆಗಳು ನಡೆಯುತಿವೆ
ಆಗಂತುಕರ ಮನಸಿನ ಮೇಳಗಳಲ್ಲಿ
ಮುಖವಾಡ ತೊಟ್ಟವರ ಮುಖಗಳೇ ಇಲ್ಲಿ
ಕಾಣುತಿರುವಾಗ, ಇದಕ್ಕೆ ಕಾರಣಗಳೆಲ್ಲಿ...
ನಿತ್ಯವೂ ನಡೆಯುವ ಕೊಲೆಗಳಿಗಂಜದೇ
ದುಷ್ಟರ ಸಂಹಾರಕ್ಕೆ ಗಟ್ಟಿ ಮನಸ್ಸಿನ
ಸ್ಪಷ್ಟ ಬರಹಗಾರರ ಚಾಟಿಏಟು ಬೇಕಿಲ್ಲಿ
ಸದೖಢ ಸಮಾಜದ ನಿಮಾ೯ಣಕ್ಕಾಗಿ
ಜಾತಿಯೆಂಬ ವಿಷಬೀಜ ಬಿತ್ತಿ ಬದುಕುತಿವೆ
ಪವಿತ್ರ ಪದಗಳಿಗೆ ಕುಲಗೆಡಿಸಿ ಮೆರೆಯುತಿವೆ
ತೋರಿಕೆಯ ತೋರಣದಲ್ಲಿ, ಹರಕೆಯ ಕುರಿಯಾಗಿ
ಊರೆಲ್ಲ ಮೆರವಣಿಗೆ ಯಾರಿಗೆ ಬೇಕೋ...
ಅವರನ್ನೆಲ್ಲಾ ಕೈಬೀಸಿ ಕರೆಯುತಿವೆ
ಹಸುವಿನ ಮುಖವಾಡ ತೊಟ್ಟ ಜಾತಿ ನಿಮಾ೯ಪಕರು
ಮೂಲ ಪ್ರತಿಭೆಗಳ ನಿಗದಿತ ಕೊಲೆ ಮಾಡಲು ಎಲ್ಲೆಂದರಲ್ಲಿ
ಹಾಕುತಿದ್ದಾರೆ ಹೊಂಚು...
ಕೈ ಚಾಚಿ ಬೇಡುತಿರುವರು ಮಚ್ಚು
ಅದೇಷ್ಟೇ ಸಲವೂ ಕೊಂದು ಬಿಡಲಿ
ಸಾಯುವುದಿಲ್ಲ ನಾವು...ಸುಟ್ಟು ಬೂದಿಯಾದರೂ
ಮತ್ತೆ ಮತ್ತೆ ಫಿನಿಕ್ಸ್ ಹಕ್ಕಿಯಂತೆ ಜೀವಿಸಬೇಕು
ಕೊಚ್ಚಿ ಕೊಲೆಗೈಯುವವರ ಸಂಗದಲ್ಲೇ
ಸಾಧನೆಯ ಪಥದಲ್ಲಿ ಸಾಗಬೇಕು.
-ವಿ.ಎಚ್.ವೀರಣ್ಣ ಮಂಠಾಳಕರ್
ಕಳೆದ ನವೆಂಬರ್ 21, 2011 ರಂದು ಬಸವಕಲ್ಯಾಣ ತಾಲೂಕಿನ ಕಸಾಪ ವತಿಯಿಂದ ನಡೆದ ನಾರಾಯಣಪೂರ ವಲಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಾಚನ ಮಾಡಿದ ಕವಿತೆ.
-------------------------
ತೋರಿಕೆಗೆ ಮಾತ್ರ ತೋರಣ ಕಟ್ಟುವ
ಸಮಾರಂಭಗಳು ಯಾರಿಗೆ ಬೇಕು
ಈ ನಿಮ್ಮ ಮೇಜು ಕುಚಿ೯ಗಳು
ಹಸಿದವರ ಹೊಟ್ಟೆಗೆ ಅನ್ನ ನೀಡದಿರುವಾಗ
ದಣಿದು ಬಂದವರಿಗೆ ದಣಿವಾರಿಸಿಕೊಳ್ಳಲು
ಆಗದಿರುವಾಗ....
ನೈಜ ಪ್ರತಿಭೆಗಳ ಕೊಲೆಗಳು ನಡೆಯುತಿವೆ
ಆಗಂತುಕರ ಮನಸಿನ ಮೇಳಗಳಲ್ಲಿ
ಮುಖವಾಡ ತೊಟ್ಟವರ ಮುಖಗಳೇ ಇಲ್ಲಿ
ಕಾಣುತಿರುವಾಗ, ಇದಕ್ಕೆ ಕಾರಣಗಳೆಲ್ಲಿ...
ನಿತ್ಯವೂ ನಡೆಯುವ ಕೊಲೆಗಳಿಗಂಜದೇ
ದುಷ್ಟರ ಸಂಹಾರಕ್ಕೆ ಗಟ್ಟಿ ಮನಸ್ಸಿನ
ಸ್ಪಷ್ಟ ಬರಹಗಾರರ ಚಾಟಿಏಟು ಬೇಕಿಲ್ಲಿ
ಸದೖಢ ಸಮಾಜದ ನಿಮಾ೯ಣಕ್ಕಾಗಿ
ಜಾತಿಯೆಂಬ ವಿಷಬೀಜ ಬಿತ್ತಿ ಬದುಕುತಿವೆ
ಪವಿತ್ರ ಪದಗಳಿಗೆ ಕುಲಗೆಡಿಸಿ ಮೆರೆಯುತಿವೆ
ತೋರಿಕೆಯ ತೋರಣದಲ್ಲಿ, ಹರಕೆಯ ಕುರಿಯಾಗಿ
ಊರೆಲ್ಲ ಮೆರವಣಿಗೆ ಯಾರಿಗೆ ಬೇಕೋ...
ಅವರನ್ನೆಲ್ಲಾ ಕೈಬೀಸಿ ಕರೆಯುತಿವೆ
ಹಸುವಿನ ಮುಖವಾಡ ತೊಟ್ಟ ಜಾತಿ ನಿಮಾ೯ಪಕರು
ಮೂಲ ಪ್ರತಿಭೆಗಳ ನಿಗದಿತ ಕೊಲೆ ಮಾಡಲು ಎಲ್ಲೆಂದರಲ್ಲಿ
ಹಾಕುತಿದ್ದಾರೆ ಹೊಂಚು...
ಕೈ ಚಾಚಿ ಬೇಡುತಿರುವರು ಮಚ್ಚು
ಅದೇಷ್ಟೇ ಸಲವೂ ಕೊಂದು ಬಿಡಲಿ
ಸಾಯುವುದಿಲ್ಲ ನಾವು...ಸುಟ್ಟು ಬೂದಿಯಾದರೂ
ಮತ್ತೆ ಮತ್ತೆ ಫಿನಿಕ್ಸ್ ಹಕ್ಕಿಯಂತೆ ಜೀವಿಸಬೇಕು
ಕೊಚ್ಚಿ ಕೊಲೆಗೈಯುವವರ ಸಂಗದಲ್ಲೇ
ಸಾಧನೆಯ ಪಥದಲ್ಲಿ ಸಾಗಬೇಕು.
-ವಿ.ಎಚ್.ವೀರಣ್ಣ ಮಂಠಾಳಕರ್
ಕಳೆದ ನವೆಂಬರ್ 21, 2011 ರಂದು ಬಸವಕಲ್ಯಾಣ ತಾಲೂಕಿನ ಕಸಾಪ ವತಿಯಿಂದ ನಡೆದ ನಾರಾಯಣಪೂರ ವಲಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಾಚನ ಮಾಡಿದ ಕವಿತೆ.